22-06-2014 ರಂದು ಮಂಡ್ಯದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಆಧುನಿಕ ವಚನಗಳು
ಸತ್ಕøತಿ
ಕೋಟಿ ಭಾಷಣಕಿಂತ ಒಂದು ಕಿಂಕೃತಿ ಲೇಸು
ಕೋಟಿ ಬೋಧನೆಗಿಂತ ಒಂದು ಸನ್ನಡತೆ ಲೇಸು !
ಕೋಟಿ ಹುಸಿಮಿತ್ರರಿಗಿಂತ ಒಬ್ಬ ಸನ್ಮಿತ್ರನು ಲೇಸು
ಕೋಟಿ ಮಿಥ್ಯಾಗುರುಗಳಿಗಿಂತ ಒಬ್ಬ ಸದ್ಗುರು ಲೇಸು ರಾಮಾನುಜ !
ಚಾರ್ವಾಕ ಮತ
ಜಡಮತಿಯ ದೃಷ್ಟಿಯಲಿ ಸುಖದುಃಖ ನಿರಪೇಕ್ಷ
ನಿರ್ಗುಣದ ವಸ್ತುವಿದೆ, ಸಾಧಿಪುದೆ ಮೋಕ್ಷ !
ನನ್ನ ಕೇಳ್ ಚೆಲುವಾದ ನಶೆಗಣ್ಣ ಸೊಕ್ಕಿರುವ
ನವಯುವತಿ ನೀವಿಯನು ಸೆಳೆಯುವುದೆ ಮೋಕ್ಷ !
ಜಡಮತಿ
ಮೇಲುಕೀಳುಗಳೆಲ್ಲ ಅರೆಮತಿಯ ಸೃಷ್ಟಿಯದು
ಜಡಮತಿಗೆ ತಿಳಿಯುವುದೆ ನಿಮ್ನ ಪೀನತೆಗಳ್?
ನೆಮ್ಮದಿಯ ಬಾಳುವೆಗೆ ಅರಿವೆ ಅರಿಯಹುದಂತೆ
ಸ್ಥಿರಮತಿಯ ಮಾಡೆನ್ನ ರಾಮಾನುಜ !
ಮುಕ್ತಿಮಾರ್ಗ
ಭಾವಶುದ್ಧಿಯ ಬಕುತಿ ಬೇಹುದು
ಅದಾವ ಜಾತಿಯೊಳಿದ್ದರೂ ಸರಿ
ಜಾವಜಾವದಲೊಮ್ಮೆ ಪೂಜೆಯ ಮಾಡಬೇಕಿಲ್ಲ.
ಕಾವನನು ಜಯಿಸಿದ್ದು ಯಾರಿಗು
ನೋವ ಗೈಯದ ಭಕ್ತರನು ಹರಿ
ಕಾವನೆಂಬಾ ಮಾತೆ ಸತ್ಯವು ಕೇಳು ರಾಮಾನುಜ !
22-06-2014 - ಎಸ್ ಎನ್ ಸಿಂಹ, ಮೇಲುಕೋಟೆ
ಶರಣ ಸಾಹಿತ್ಯ ಸಮ್ಮೇಳನ, ಮಂಡ್ಯ