Sunday, August 1, 2010

ಕೇರಳೆಗೆ ಕುಬಸ..

ಕೇರಳೆಗೆ ಕುಬಸ..   
ಶರದ ಚಂದ್ರನ ತುಂಬು ಕಾಂತಿಯ
ಪೊರೆಯ ನೂಲಲಿ ಕುಶಲರಾಗಿಹ
ಸುರಪುರಿಯ ನೇಕಾರರಿಂದಲಿ ಬಲೆಯ ನೇಯಿಸುತಾ |
ಬೆರೆತ ಹಿಮಕರ್ಪೂರ ನೀರಲಿ
ವಿರಲ ವಸ್ತ್ರವ ನೆನೆಸಿ ಕೊಟ್ಟರೆ
ತೆರೆದೆದೆಯ ಕೇರಳೆಯು ಸಾಧ್ಯವೊ ತೊಡಲು ಕುಪ್ಪಸವ ! ||


ನಿರ್ಮೋಕೋ ಯದಿ ಶಾರದೇಂದು ಮಹಸಾ ಮಾಯಾಸ್ಯ ಸಂಗೃಹ್ಯತೇ
ದಿವ್ಯೈಸ್ತೇನ ಕುವಿಂದ ತಂತುಕುಶಲೈರ್ಯಜ್ಜಾಲಿಕಾ ಕಲ್ಪ್ಯತೇ |
ಆಸೇಕೋ ಹಿಮವಾಲುಕಾಂಬುಪೃಷತಸ್ತತ್ರಾಸಕೃತ್ತನ್ಯತೇ
ಶಕ್ಯಂ ಕೇರಳ ಸುಭ್ರುವಾಂ ಸ್ತನತಟಂ ಕರ್ತುಂ ನಿಚೋಲಾಂಚಿತಮ್ ||
(ಆಸೂರಿ ಆನಂದಾಳ್ವಾರ್ ಗುರೋಃ)

ಶೂರ ಧರ್ಮ.

ಶೂರ ಧರ್ಮ..
ಕ್ರೂರಂ ಮತ್ತನಿವಾರ್ಯನೇ ಬಿಸುಡೆಲೋ ಫುಲ್ಲೋತ್ಪಲಂ ಮಾರನೇ
ವೈರಂ ನನ್ನೊಡನೇಕೆ ಬಾಣ ತೊರೆ ನೀನ್ ಆ ಬಿಲ್ಲು ಮತ್ತೇತಕೆ ? |
ನೀರಾ ಸಂಗ ವಿಯೋಗ ದುಃಖ ಝಳದಿಂದೀದೇಹ ಬೇಯುತ್ತಿರಲ್
ಶೂರರ್ಗೀಪರಿ ಧರ್ಮವೇ ಮೃತನನುಂ ಮತ್ತೊಮ್ಮೆ ನೀ ಕೊಲ್ವುದೇ ! ||


ರೇ ರೇ ನಿರ್ದಯ ದುರ್ನಿವಾರ ಮದನ ಪ್ರೋತ್ಫುಲ್ಲ ಪಂಕೇರುಹಮ್
ಬಾಣಂ ಸಂವೃಣು ಸಂವೃಣು ತ್ಯಜ ಧನುಃ ಕಿಂ ಪೌರುಷಂ ಮಾಂ ಪ್ರತಿ |
ಕಾಂತಾಸಂಗವಿಯೋಗದುಃಖದಹನ ಜ್ವಾಲಾವಲೀಢಂ ವಪುಃ
ಶೂರಾಣಾಂ ಮೃತಮಾರಣೇ ನ ಹಿ ಪರೋ ಧರ್ಮಃ ಪ್ರಯುಕ್ತೋ ಬುಧೈಃ ||

ದೇವಶಿಖಾಮಣಿ ಯವರ ಸ್ವಪ್ನ ವೃತ್ತಾಂತ

ದೇವಶಿಖಾಮಣಿ ಯವರ ಸ್ವಪ್ನ ವೃತ್ತಾಂತ


ಘೋರಂ ಕೇಳಿದುವೇ ಕಣಾ ಕನಸಿದೇಂ ಸಾಶ್ಚರ್ಯ ಬೀಭತ್ಸಕಂ
ಕ್ರೂರ ವ್ಯಾಘ್ರಿಣಿ ಕಾಡಿನೊಳ್ತಿರುಗುತಲ್ಗಬ್ಬಂ ತಳೆರ್ದಿರ್ಪ ಆ |
ಭಾರೀ ಜಿಂಕೆಯನೊಯ್ದು ಗರ್ಭಮನಗೋ ಸೀಳುತ್ತಲಾ ರೀತಿಯಂ
ತೋರ್ಕುಂ ತನ್ನಯ ಕೂಸುಗಳ್ಗೆ ಪಲಮನ್ನೂಡುತ್ತ ತಿನ್ನುತ್ತಿದೇಂ ||


ವ್ಯಾಘ್ರ್ಯೇಕಾ ವಿಪಿನೇ ವಿಹಾಯ ಹರಿಣಾನಾಸನ್ನಸೂತಿಂ ಮೃಗೀಂ
ಹೃತ್ವಾನೀಯ ಗುಹಾಂ ತದೈವ ನಖರೈರ್ಭಿತ್ವಾ ತದೀಯೋದರಮ್ |
ದೃಷ್ಟ್ವಾ ತತ್ರ ಲುಠಂತಮರ್ಭಕಮಸುತ್ಯಾಗಾತ್ಪುರೈವಾದರಾತ್
ಪೋತೇಭ್ಯೋ ದದತೀ ಸ್ವಯಂ ಚ ಹರಿಣೀಂ ಖಾದತ್ಯಹೋ ನಿತ್ಯಶಃ ||
(ದೇವಶಿಖಾಮಣಿ ತಿರುಮಲಯ್ಯಂಗಾರ್ಯರ ಸ್ವಪ್ನ ವೃತ್ತಾಂತ, 
ಜಗ್ಗೂ ವೇಂಕಟಾಚಾರ್ಯರ ಕವಿತಾ ದೈನಂದಿನೀಯಿಂದ ಉದ್ಧೃತ)

ವಿತಥನಾಥನ ಗತಿ...

ವಿತಥನಾಥನ ಗತಿ...
ಸತಿಯ ಗಿರಿಜೆಯ ಪ್ರಣಯ ಕೋಪದ
ಗತಿಗೆ ಬೆದರಿದ ಹರನು ಒಡನೆಯೆ
ನತ ಸಮಸ್ತಕನಾದೊಡೇನಹ ! ನೆತ್ತಿ ಮೇಲಿರುವಾ |
ಸತಿಯು ಮತ್ತೊಬ್ಬಳನು ಕಂಡತಿ
ಖತಿಯಗೊಂಡೊದೆಯುತಿರೆ ನಿಮ್ಮನು
ವಿತಥನಾಥನ ಈ ವಿಲಕ್ಷಣ ಗತಿಯು ಕಾಪಿಡಲಿ ||
೨೪-೦೭-೨೦೦೦
ಪ್ರಣಯಕುಪಿತಾಂ ದೃಷ್ಟ್ವಾ ದೇವೀಂ ಸಸಂಭ್ರಮ ವಿಸ್ಮಿತಃ
ತ್ರಿಭುವನಗುರುರ್ಭೀತ್ಯಾ ಸದ್ಯಃ ಪ್ರಣಾಮಪರೋsಭವತ್ |
ನಮಿತಶಿರಸೋ ಗಂಗಾಲೋಕೇ ತಯಾ ಚರಣಾಹತಾ-
ವವತು ಭವತಸ್ತ್ರ್ಯಕ್ಷ್ಯಸ್ಯೈತದ್ವಿಲಕ್ಷಣಮವಸ್ಥಿತಮ್ ||
(ಶ್ರೀಮುಂಜ ವಾಕ್ಪತಿದೇವ ಕೃತ)