Sunday, January 6, 2013

ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು


30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ 
ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು

ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ.

ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್)

ಕ್ರೂರಂ ಮನೋಭವನದೆಂಬುದು ಚಿತ್ತವೇದ್ಯಂ 
ವೈರಕ್ಕಸಾಧ್ಯನಿದೊ ಸಾಕ್ಷಿ ಗಡಾರ್ಧಕಾಂತಮ್ |
ನೀರಂ ರತೀಶ್ವರಿಯೆನಲ್ ಮಿಗೆ ತೃಪ್ತಿತೋಷರ್ 
ಶೂರಾರ್ಧರಪ್ಪ ಸುತೆಸೂನುಗಳಲ್ತೆ ನೋಡಲ್ ||

ಪೃಚ್ಛಕ ಪೂರಣ : (ವಿ|| ಎಸ್ ಎನ್ ಸಿಂಹ, ಮೇಲುಕೊಟೆ)

ಕ್ರೂರಂ ಮತ್ತನಿವಾರ್ಯನೇ ಬಿಸುಡೆಲೋ ಫುಲ್ಲೋತ್ಪಲಂ ಮಾರನೇ
ವೈರಂ ನನ್ನೊಡನೇಕೆ ಬಾಣ ತೊರೆ ನೀನ್ ಆ ಬಿಲ್ಲು ಮತ್ತೇತಕೆ |
ನೀರಾಸಂಗವಿಯೋಗ ದುಃಖಝಳದಿಂದೀದೇಹ ಬೇಯುತ್ತಿರಲ್
ಶೂರರ್ಗೀಪರಿ ಧರ್ಮವೇ ಮೃತನನುಂ ಮತ್ತೊಮ್ಮೆ ನೀ ಕೊಲ್ವುದೇ ||


ಸಮಸ್ಯಾ ಪೂರಣ : ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್

ಗಡಿಯಂ ಕಾಯುತಲಿದ್ದರು
ನಾಡಾಳ್ವರ ಕೃಪೆಯಿಂ ಗೌಡೀತುರುಕರು ಬೆಂ-
ಗಡೆಯಿಂ ನುಸುಳುತೆ ಕಾವಲ್
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್  !

(ಗೌಡೀ = ಬಂಗಾಳ = ಬಾಂಗ್ಲಾಮುಸ್ಲಿಮರು)

01-12-2012 - ಎಸ್ ಎನ್ ಸಿಂಹ, ಮೇಲುಕೊಟೆ